30 Apr 2020

ಕೊರೊನಾ


ಮನೆ ತಿಂಡಿ ಮನೆ ಊಟ
ಮನೆಯಿಂದನೆ ಆಫೀಸ್ ಕೆಲ್ಸ
ಮಾಡಿಸಿಬಿಡ್ತು ಕೊರೊನಾ

ಹಾಲು, ತರಕಾರಿ, ಮೆಡಿಕಲ್, ದಿನಸಿ
ತೆಗೆಸಿ ಉಳಿದ ಅಂಗಡಿಗಳನ್ನೆಲ್ಲ
ಮುಚ್ಚಿಸಿಬಿಡ್ತು ಕೊರೊನಾ

ಎರಡು ಮೂರು ತಿಂಗಳಲ್ಲಿ
ಜೀವನ ಶೈಲಿಯನ್ನು 
ಬಡಲಿಸಿಬಿಡ್ತು ಕೊರೊನಾ

22 Mar 2020

***ಕೊರೊನಾ***


ಅಂದಿನಿಂದ ಇಂದಿನ ತನಕ
ಬಂದ ವೈರಸ್ಸುಗಳೆಲ್ಲ
ಸಿಕ್ಕಿದ್ದೆಲ್ಲ ತಿಂದ 
ದೇಶದಿಂದ..

ಅಂದು ಬಂದದ್ದು
ಸೊಳ್ಳೆಯಿಂದ,
ನೀರಿನಿಂದ,
ಹಂದಿ,ಇಲಿ, ಬಾವಳಿಗಳಿಂದ..

ಇಂದು ಬಂತು ಸ್ಪರ್ಶದಿಂದ...
ಮುಂದೊಂದು ದಿನ
ಬರಬಹುದು ಗಾಳಿಯಿಂದ...

ಸಮಯದ ಅಭಾವದಿಂದ
ಅರ್ಧ ಬೇಯಿಸಿ ತಿಂದ..
ಕಯ್ ಬಾಯಿ ವರೆಸಿ ಕಾಗದದಿಂದ...
ಹೀಗೆ ಹರಡಿದ ವೈರಸ್ಸಿನಿಂದ
ತಾನು ನೊಂದ..ಹಲವರನ್ನು ಕೊಂದ...

ತಿದ್ದಿಕೊಳ್ಳದಿದ್ದರೆ ಬುದ್ಧಿವಂತಿಕೆಯಿಂದ
ತಿಳಿಯುವುದು ಒಂದುದಿನ ಸರ್ವನಾಶದಿಂದ..
ದುಡಿದು, ಕೊಂದು, ತಿನ್ನುವುದಷ್ಟೇ ಅಲ್ಲ
ತೊಳೆದುಕೊಳ್ಳುವುದು ಮುಖ್ಯ
ಎನ್ನುವ ಸತ್ಯ ಅರಿತರೆ ಚಂದ.

30 Jan 2018

Kannada kavana(ಕನ್ನಡ ಕವನ) :ಏನ್ಮಾಡಲಿ

ಏನ್ಮಾಡಲಿ

ನಿನ್ನೆಯ ನೆನಪಲ್ಲಿ
ನಾಳೆಯ ಕನಸಲ್ಲಿ
ಇಂದು ಕಳೆದು ಹೋಯಿತಲ್ಲ ಏನ್ಮಾಡಲಿ

ಬಾಲ್ಯದ ನೆನಪಲ್ಲಿ
ಮುಪ್ಪಿನ ಭಯದಲ್ಲಿ
ಯವ್ವನ ಮುಗಿದ್ಹೋಯ್ತಲ್ಲ ಏನ್ಮಾಡಲಿ

ಬೆಳೆಯುವ ತುಡಿತದಲಿ
ದುಡಿಯುವ ಹುರೂಪಿನಲಿ
ಬದುಕುವುದೇ ಮರೆತೋಯಿತು ಏನ್ಮಾಡಲಿ

ಕಲಿತ ವಿದ್ಯೆಯಿಂದ ಕೆಲಸಕ್ಕೆ ಒಳಿತಾಯಿತು
ದುಡಿದ ಹಣವೆಲ್ಲ ವೈದ್ಯರ ಬಳಿ ಹೋಯಿತು
ನನ್ನದೇನು ಇಲ್ಲ ಏನ್ಮಾಡಲಿ

7 Oct 2017

Kannada kavana(ಕನ್ನಡ ಕವನ) :ಜೀವನ


ಜೀವನ

ಜೀವನದ ಗಾಡಿ ನಿಲ್ಲದು ಎಂದು
ನಾವೇ ನಡೆಸಿದರೆ ಚಂದ
ಇಲ್ಲ ನಡೆಯುವುದು..
ಅವರು ತಳ್ಳುವುದರಿಂದ...
ಇಲ್ಲ ಇವರು ಎಳೆಯುವುದರಿಂದ...

Kannada kavana(ಕನ್ನಡ ಕವನ) :ಕಪ್ಪು ಬಿಳುಪು



ಕಪ್ಪು ಬಿಳುಪು


ಕಪ್ಪು ಬಿಳುಪಿನ ಕಣ್ಣಲ್ಲಿ

ಅದೆಷ್ಟು ಬಣ್ಣದ ಕಥೆಯಿದೆ

ಕಗ್ಗತ್ತಲ ಇರುಳಲ್ಲಿ

ಅದೆಷ್ಟು ಬಣ್ಣದ ಕನಸಿದೆ

ಇಂದಿನ ಬದುಕಲಿ

ನಾಳಿನ ಗೆಲುವು ಅಡಗಿದೆ

ನಿನ್ನೆಯ ನೆನಪಲ್ಲಿ

ನಾಳಿನ ಬದುಕಿನ ಬಿಂಬ ತುಂಬಿದೆ

ಕಪ್ಪು ಬಿಳುಪಿನ ಕಣ್ಣಲ್ಲಿ

ಅದೆಷ್ಟು ಬಣ್ಣದ ಕಥೆಯಿದೆ


22 Sept 2017

Kannada kavana(ಕನ್ನಡ ಕವನ) :ಬೆಂಗಳೂರು







ಬೆಂಗಳೂರು:


ಬೆಂದಕಾಳೂರು ಬೆಂಗಳೂರು ಆಯ್ತು
ಮರಗಳೆಲ್ಲವು ಮರೆಯಾಗಿ ಹೋಯ್ತು
ಪ್ರಗತಿಯ ನೆಪದಲ್ಲಿ ಕೆರೆಗಳೇ ಕಳೆದುಹೋಯ್ತು
ರಸ್ತೆಗಳು ದೊಡ್ದದಾಯ್ತು ಮನಸುಗಳು ಚಿಕ್ಕದಾಯ್ತು
ಪೆನ್ನು ಪುಸ್ತಕಗಳು ಕಾಲೇಜಿಗೆ ಸೀಮಿತ ಆಯ್ತು
ಕಿಟಕಿಯ ಸೀಟು ಸಿಕ್ಕರು
ಚಿಕ್ಕದಾಯ್ತು ನೋಡುವಂತಾಯ್ತು..
ಸುಂದರ ಆಫೀಸು 
ಅತಿಸುಂದರ ಮನೆ ಇದ್ದರೂ 
ಅರ್ಧ ಜೀವನ ರಸ್ತೆಯಲ್ಲೆ ಕಳೆಯುವಂತಾಯ್ತು...
ಸಿಟಿ ಲೈಫು ಬಿಜಿ ಲೈಫು 
ಗೊತ್ತಿದ್ದೂ ಬಿಟ್ಟು ಇರಲಾಗದ ಬಿಸಿ ತುಪ್ಪವಾಯ್ತು

20 Sept 2017

Kannada kavana(ಕನ್ನಡ ಕವನ) :ನಾನು



ನಾನು:
ನಾನು ನನ್ನದೇನು ಇಲ್ಲ
ದೇಹ ಆತ್ಮ ನನ್ನದಲ್ಲ
ನಾನು ಎನ್ನೋ ಅಹಂಕಾರ
ಯಾಕೆ ನನ್ನ ತೊರೆಯುತ್ತಿಲ್ಲ

ತಂದೆ ತಾಯಿ ಕೊಟ್ಟ ಜನ್ಮ
ಹೆಸರು ಯಾರೋ ಇಟ್ಟರಣ್ಣ
ಕಲಿತ ವಿದ್ಯೆ ಅರಿತ ಕಸುಬು
ಯಾವುದೂ ನನ್ನದಲ್ಲ
ನಾನು ಎನ್ನೋ ಅಹಂಕಾರ
ಯಾಕೆ ನನ್ನ ತೊರೆಯುತ್ತಿಲ್ಲ

ಸತ್ತಮೇಲೆ ದೇಹ ಆತ್ಮ
ಎರಡು ಬೇರೆ ಆಗುವುದಂತೆ
ಎರಡು ದಿನ ದುಃಖ ವಂತೆ
ಮತ್ತೆ ಅವರಿಗವರದೆ ಚಿಂತೆ
ನನ್ನವರು ಯಾರು ಇಲ್ಲ
ನನ್ನದೆಂದು ಏನು ಇಲ್ಲ

ಕತ್ತಲಲ್ಲಿ ನನ್ನ ನೆರಳು
ನನ್ನ ಜೊತೆ ಬರುವುದಿಲ್ಲ
ಸಾವಿನತ್ತ ನನ್ನ ಪಯಣ
ಸಾಗುತ್ತಿದೆ ನಿಲ್ಲದಂತೆ

ಎಲ್ಲ ತಿಳಿದು ತಿಳಿಯದಂತೆ
ಬದುಕಿ ಸಾದಿಸಿದವರಂತೆ
ನಾನು ಎನ್ನೋ ಅಹಂಕಾರ
ಯಾಕೆ ನನ್ನ ತೊರೆಯುತ್ತಿಲ್ಲ

19 Sept 2017

Kannada kavana(ಕನ್ನಡ ಕವನ):ಮಾನವ

ಮಾನವ:


ಮರವನ್ನು ಬಲಿಕೊಟ್ಟೆ
ಮಳೆಗೆ ಯಾಗವನಿಟ್ಟೆ
ನೀರು ನೀರು .. ಹೇಳುತ್ತಾ
ರಕ್ತವನೆ ಹರಿಬಿಟ್ಟೆ
ಬಿಸಿಲ ಬೇಗೆಗೆ ವ್ಯಥೆಇಟ್ಟೆ
ಪಕ್ಷಿಯ ಅಂದದ ಚಿತ್ರ
 ಗೋಡೆಯಲಿ ತೂಗಿಟ್ಟೆ
ಪರಿಸರ ಪ್ರೇಮವ ವರುಷಕೊಮ್ಮೆ
ಹರಿಬಿಟ್ಟೆ
ಮೂಲವನೆ ಮರೆತು ಮುಂದೆ ಹೆಜ್ಜೆಯನಿಟ್ಟೆ
ಮರವನ್ನೇ ಮರೆತು
ಉಸಿರನ್ನು ಹುಡುಕಲು ಹೊರಟೆ..

18 Sept 2017

Kannada kavana(ಕನ್ನಡ ಕವನ):ನಗರ ಜೀವನ

ನಗರ ಜೀವನ :


ಹಗಲು ರಾತ್ರಿ ಶ್ರಮಿಸಿ

ಕೈತುಂಬ ಹಣ ಗಳಿಸಿ

ಮಾಲಿನ್ಯಗಳ ಬೆಳೆಸಿ

ಶುದ್ಧ ನೆಲ,ಜಲ,ವಾಯು ಆರೋಗ್ಯದ ಕಡೆಗೆ

 ದುಡಿದ ಹಣವನು ವ್ಯಯಿಸಿ

ನೆಮ್ಮದಿಯ ಹುಡಕಾಟದಲಿ

ಪೂರ್ತಿ ಜೀವನವ ವ್ಯಯಿಸಿ

ಅಂತ್ಯ ಕಾಣುವ ಬದುಕೇ

ನಗರ ಜೀವನ

Kannada kavana(ಕನ್ನಡ ಕವನ):ಯುಗಾದಿ

ಯುಗಾದಿ:

ಒಣ ಎಲೆ ಉದುರಿ ಹೊಸ ಚಿಗುರು ಬರುವಂತೆ
ಹಳೆ ನೋವು ಮರೆಸಿ ಹೊಸ ಹುರುಪು ಬರುವಂತೆ
ಹಗಲು ಇರುಳಂತೆ,ಮಳೆಯು ಬಿಸಿಲಂತೆ
ಕಷ್ಟ ಸುಖವು ಬರಲಿ ಸರಿಸಮವಿರುವಂತೆ
ಬೆವು ಬೆಲ್ಲ ಬರಿ ನೆಪಮಾತ್ರ
ಯುಗಾದಿ ಬಂದಿದೆ ಮತ್ತೆ ಪ್ರತಿವರುಷ ಬರುವಂತೆ

Kannada kavana(ಕನ್ನಡ ಕವನ):ಕನಸು


ಕನಸು:


ಕನಸಿಗೆ ರೆಕ್ಕೆ ಕಟ್ಟಿ
ಹಾರಿದೆ ಮನದ ಹಕ್ಕಿ
ನಿಲುಕದ ಬಾನಿನಲ್ಲಿ
ಸಾಗಿದೆ ಭಯವ ಮೆಟ್ಟಿ
ಮುಗಿಲಿನ ಒಡಲ ಛೀರಿ 
ಲೋಕದ ಮಿತಿಯ ಮೀರಿ
ಕಲ್ಪನೆಯ ರಥವನೇರಿ
ಕನಸಿಗೆ ರೆಕ್ಕೆ ಕಟ್ಟಿ
ಹಾರಿದೆ ಮನದ ಹಕ್ಕಿ
ನೈಜತೆಯ ದೂರ ಒತ್ತಿ
ಕಲ್ಪನೆಯ ಮೋಡ ಹತ್ತಿ
ಯೆಲ್ಲ ಎಲ್ಲೆಯ ಮೀರಿ
ಹಾರಿದೆ ರೆಕ್ಕೆ ಬಿಚ್ಚಿ
ಚಿಂತೆಯ ನೆರಳ ಮೆಟ್ಟಿ
ಗೆಲುವಿನ ಏಣಿ ಹತ್ತಿ
ಕನಸಿಗೆ ರೆಕ್ಕೆ ಕಟ್ಟಿ
ಹಾರಿದೆ ಮನದ ಹಕ್ಕಿ

Kannada kavana(ಕನ್ನಡ ಕವನ):G- ವನ

G- ವನ:
ಹಲವು ವಿದ್ಯೆಯ ಕಲಿತೆ
ನನ್ನಲಿರುವುದ ಮರೆತೆ
ಉಧರ ನಿಮಿತ್ತ ಊರೂರು ಅಲೆದೆ
ಅನ್ಯರೊಳಗೊಂದಾಗಿ ನನ್ನತನವನು ಮರೆತೆ
ಅನ್ಯರಲಿ ನನ್ನವರ ಹುಡುಕಾಟದಲಿ
ನನ್ನವರಿಂದ ನಾ ದೂರ ಸರಿದೆ
ಅರ್ಥ ವಾಗದ ಬದುಕಿಗೆ
ಅರ್ಥ ಹುಡುಕಲು ಹೊರಟೆ
ಅರ್ಧ ಜೀವನ ಕಳೆದೆ
ಮುಂದೇನು ಅರಿಯದೆ
ಹಿಂದಿರುಗಲಾಗದೆ
ಚಿಂತೆಯ ಚಿತೆಯಲ್ಲಿ
ಬೆಂದೆ ನಾ ನೊಂದೆ.